Chitradurga Zilla Panchayat is a three - tier Panchayat raj system with elected bodies at the Grama, Taluka and District levels constituted as per the 73rd amendment to the constitution for greater participation of the people and more effective implementation of rural development programs (and to function as units of local self government). The Zilla Panchayats were constituted as per the provisions of The Karnataka Panchayat Raj Act, 1993. The Zilla panchayat structure and activities are categorised into two important elements as listed below.

The Political Structure - Chitradurga Zilla Panchayat is an elected body constituted of the following members

  • 34 Members are elected from geographically demarcated constituencies from within the rural areas of the district.

  • Member of Parliament of the district .

  • Members of State Legislative Assembly and State Legeslative Council for the district.

  • The Adyaksha of Six Taluk Panchayats of the district.

  • Adhyaksha and Upadhyaksha : are elected from the directly elected members of the Zilla Panchayat.

  • Standing Committee :To facilitate greater discussion in the functioning of zilla panchayat, 5 standing committees have been formed. Each standing committee consists of zilla panchayat members not exceeding seven in number including the chairman, who are elected by the zilla panchayat from among the elected members.

  • Term of Office : The term of office for Adhyaksha,Upadhyaksha and Standing committee is 20 months.The term of elected members is 5years.

  • OFFICIAL STRUCTURE

For smooth functioning & administration of the zilla panchayat office , an officer designated "Chief Executive Officer" is appointed by the state government to carry out administration of Zilla Panchayat. Chief Executive Officer is designated head of department for all the department offices within the Zilla panchayat. He is assisted in the discharge of his duties by Senior Officers in the Zilla Panchayat .

Name of the Officer
Contact Details
Chief Executive Officer, Zilla Panchayat
08194-223061
Deputy Secretary (Administration)
08194-223058
Project Director (Development)
08194-222272
Chief Planning Officer
08194-222792
Chief Accounts Officer
08194-223064

The work of Zilla Panchayat can be divided into following sections

1.Development Section : Headed by Deputy Secretary (Development), This section is concerned with execution of all rural development schemes, water supply schemes, Minor irrigation works, road works and other developmental works.

2.Administration Section : Headed by Deputy Secretary(Administration), This section is concerned with the establishment issues and general administration of all the departments of zilla panchayat.

3.Planning Section: Headed by Chief Planning Officer, This section looks after formulation of Draft Annual Plan, formulation of action plan for different development schemes & monitoring & evaluation of schemes.

4.Accounts Section: Headed by Chief Accounts Officer, This section is responsible for receipts and releases of funds regarding all departments and various development schemes. Also this section is involved in taking up audit of all the departments coming under zilla panchayat.

 

 RDPR Karnataka Department link

 

 

ಜಿಲ್ಲಾ ಪಂಚಾಯತ್ ಚಿತ್ರದುರ್ಗ

 ಕಾಮಗಾರಿಗಳ ವಿವರ

ಗಾಂಧಿ ಸಾಕ್ಷಿ ಕಾಯಕ

                                                                                                                                                                                   

                                                                                                                                              

  

Gandhi Sakshi Kayaka

1. DISTRICT HEALTH AND FAMILY WELFARE SERVICES CHITRADURGA

 

ಇಲಾಖೆಯ ಪೀಠಿಕೆ ಮತ್ತು ಸಂಘಟನೆ:-

 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆಯು ಜಿಲ್ಲಾ ಪರಿಷತ್ ಅಡಿಯಲ್ಲಿ 1987 ರಿಂದಲೂ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿನ ಜನರ  ಆರೋಗ್ಯವನ್ನು  ಸುಧಾರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸರ್ಕಾರದ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

 

ಇಲಾಖೆಯ ಮೂಲ ಉದ್ದೇಶ :

 

ಜಿಲ್ಲೆಯಲ್ಲಿನ ಎಲ್ಲಾ ಜನರಿಗೆ ಮೂಲಭೂತ ಆರೋಗ್ಯ ಸೇವೆ ಒದಗಿಸುವುದು ಮೂಲ ಉದ್ದೇಶವಾಗಿರುತ್ತದೆ. ಹಾಗೂ ಸರ್ಕಾರ ನಿಗದಿಗೊಳಿಸಿದ ಆರೋಗ್ಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯೋನ್ಮುಖವಾಗುವುದು ಹಾಗೂ ವಿವಿಧ ಆರೋಗ್ಯ ಸೇವೆಗೆ ಸಂಬಂಧಪಟ್ಟ ವಿವಿಧ ಕಾರ್ಯಕ್ರಮಗಳ ಮುಖಾಂತರ ಆರೋಗ್ಯಸೇವೆ ಒದಗಿಸುವುದು ಇಲಾಖೆಯ ಮೂಲ ಉದ್ಧೇಶವಾಗಿರುತ್ತದೆ.

 

ಎಲ್ಲಾ ಕಾರ್ಯಕ್ರಮಗಳು ಮತ್ತು ಯೋಜನೆ ಮುಖ್ಯಾಂಶಗಳು

 

ಜಿಲ್ಲೆಯ  ಇಲಾಖೆಗೆ ಸಂಬಂಧಿಸಿದಂತೆ ಈ ಕೆಳಕಂಡ ಯೋಜನೆಗಳಿದ್ದು, ಈ ಯೋಜನೆ ಮುಖಾಂತರ  ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು. ಮತ್ತು ರೋಗ ನಿಯಂತ್ರಣಗೊಳಿಸಲು ಕಾರ್ಯಕ್ರಮ  ಅಧಿಕಾರಿಗಳು ಕ್ರಮವಹಿಸುತ್ತಾರೆ.


1. ಆರ್.ಸಿ. ಕಾರ್ಯಕ್ರಮ: 
ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಒಬ್ಬ ಕಾರ್ಯಕ್ರಮಾಧಿಕಾರಿಗಳು ಇದ್ದು, ತಾಯಿ ಮಕ್ಕಳ  ಆರೋಗ್ಯದ ಬಗ್ಗೆ ಮತ್ತು ಶಿಶುಮರಣ ಪ್ರಮಾಣ ಕಡಿಮೆ ಮಾಡುವ ಬಗ್ಗೆ ತಾಯಿ ಮರಣದ ಪ್ರಮಾಣ ಮಾಡುವುದರ ಬಗ್ಗೆ ಹಾಗೂ ತಾಯಿ ಮಗು ಆರೋಗ್ಯದ ಬಗ್ಗೆ ಸೂಕ್ತ  ಆರೋಗ್ಯ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.


2. ಜಿಲ್ಲಾ ಸರ್ವಲೆನ್ಸ್: 
ಈ ಕಾರ್ಯಕ್ರಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ನಿಗಾವಹಿಸಲಾಗುವುದು. ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಒಬ್ಬ ಕಾರ್ಯಕ್ರಮಾಧಿಕಾರಿಗಳು ನಿಯೋಜಿಸಲಾಗಿದ್ದು ಸಾಂಕ್ರಾಮಿಕ ರೋಗ ನಿಯಂತ್ರಣದ ಬಗ್ಗೆ ಕ್ರಮವಹಿಸುತ್ತಾರೆ.


3) ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ ಮತ್ತು ಪೈಲೇರಿಯಾ ಇವುಗಳ ನಿಂತ್ರಣದ ಬಗ್ಗೆ 
ಕ್ರಮವಹಿಸಲಾಗುವುದು.


4) ಕ್ಷಯ ರೋಗ ನಿಂತ್ರಣದ ಬಗ್ಗೆ ಕ್ರಮವಹಿಸಲಾಗುವುದು ಕುಷ್ಠರೋಗ ನಿಂತ್ರಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.



5) ಏಡ್ಸ್


6)ವಿಚಾರ ಗೋಷ್ಠಗಳು/ತರಬೇತಿಗಳು/ವಸ್ತುಪ್ರದರ್ಶನಗಳು 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳವಾರು ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವಿವಿಧ ವೃಂದಗಳ ನೌಕರರುಗಳಿಗೆ ಉತ್ತೇಜಿಸುವ ಸಲುವಾಗಿ ವಿಚಾರ ಗೋಷ್ಠಿಗಳ ಮುಖಾಂತರ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ಹಾಗೂ ಇಲಾಖೆ ಹಾಗೂ ಆರೋಗ್ಯದ ಬಗ್ಗೆ ಆರೋಗ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಸ್ತು ಪ್ರದರ್ಶನಗಳನ್ನು ಶ್ರೀ ಸಿದ್ದಗಂಗಾಮಠದಲ್ಲಿ ಹಾಗೂ ಪಟ್ಟನಾಯಕನಹಳ್ಳೀಯಲ್ಲಿ ಪ್ರತಿ ವರ್ಷವೂ ಏರ್ಪಡಿಸಲಾಗುವುದು.

ಜಿಲ್ಲಾ ವಲಯ ಯೋಜನೆಯಡಿ ಕಾರ್ಯಕ್ರಮಗಳ ಅನುಷ್ಠಾನ :
ಈ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳ ನಿರ್ವಹಣೆ, ಕಟ್ಟಡಗಳ ನಿರ್ಮಾಣ, ಆಸ್ಪತ್ರೆ ಉಪಕರಣಗಳ ದುರಸ್ತಿ ಹಾಗೂ ಸಾಧನ ಸಲಕರಣೆಗಳ ಸರಬರಾಸಜು ಮಾಡಲಾಗುವುದು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣ ಮಹಿಳೆಯರಿಗೆ ಕೆಳಕಂಡ ಕಾರ್ಯಕ್ರಮಗಳಡಿ ಸೌಲಭ್ಯಗಳನ್ನು ಅರ್ಹ ಗ್ರಾಮೀಣ ಮಹಿಳೆಯರಿಗೆ ಪ್ರೋತ್ಸಾಹ ಧನ ಹಾಗೂ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುವುದು.

ಜನನಿ ಸುರಕ್ಷಾ ಯೋಜನೆ :
ಜನನಿ ಸುರಕ್ಷಾ ಯೋಜನೆಯಡಿ ಮನೆಯಲ್ಲಿ ಹೆರಿಗೆ ಆದರೆ ರೂ.500-00 ಪ್ರೋತ್ಸಾಹಧನ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆದಲ್ಲಿ ರೂ. 700-00 ಹಾಗೂ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆ ಆದಲ್ಲಿ ಕ್ರಮವಾಗಿ ರೂ. 600-00 ಹಾಗೂ ರೂ. 700-00 ಹಾಗೂ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಹೆರಿಗೆಯಾದಲ್ಲಿ ರೂ. 1500-00 ಗಳನ್ನು ಪ್ರೋತ್ಸಾಹಧನವನ್ನಾಗಿ ನೀಡಲಾಗುವುದು.

ಮಡಿಲು ಕಾರ್ಯಕ್ರಮ :
ಈ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮಡಿಲು ತುಂಬುವುದನ್ನು ಹಮ್ಮಿಕೊಳ್ಳಲಾಗುವುದು. ಈ ಸಂದರ್ಭಗಳಲ್ಲಿ ಗರ್ಭಿಣಿ ಸ್ತ್ರೀಗೆ ಗಂಡಾಂತರ ಹೆರಿಗೆಗಳಲ್ಲಿ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಹಾಗೂ ಗ್ರಾಮೀಣ ಸ್ತ್ರೀಯರು ಪಡೆಯಬೇಕಾದ ಪ್ರತಿಬಂಧಕ ಲಸಿಕೆಗಳ ಬಗ್ಗೆ ಶುಚಿತ್ವದ ಬಗ್ಗೆ ಅರಿವು ಮೂಡಿಸಲಾಗುವುದು.

ಪ್ರಸೂತಿ ಆರೈಕೆ :
ಈ ಕಾರ್ಯಕ್ರಮದಡಿಯಲ್ಲಿ ನವಜಾತ ಶಿಶುಗಳಿಗೆ ರೋಗ ಪ್ರತಿಬಂಧಕ ಲಸಿಕೆಗಳನ್ನು ನೀಡಲಾಗುವುದು. ಹಾಗೂ ಈ ಕಾರ್ಯಕ್ರಮದಡಿಯಲ್ಲಿ ನವಜಾತ ಶಿಶುವಿನ ಆರೈಕೆಗೆ ಹಾಗೂ ಬಾಣಂತಿ ಶುಶ್ರೂಷೆಣೆಗೆ ಅಗತ್ಯವಿರುವ ವಸ್ತುಗಳನ್ನು ಒಟ್ಟಾರೆಯಾಗಿ ಮಡಿಲು ಕಿಟ್ಟು ಮುಖಾಂತರ ನೀಡುವ ಸೌಲಭ್ಯವಿರುತ್ತದೆ.

1. ಸಾರ್ವತಿಕ ಲಸಿಕಾ ಕಾರ್ಯಕ್ರಮ :
ಈ ಕಾರ್ಯಕ್ರಮದಡಿಯಲ್ಲಿ 0 ವರ್ಷದಿಂದ 5 ವರ್ಷಗೊಳಗಿನ ಮಕ್ಕಳಿಗೆ ತಗಲಬಹುದಾದ ರೋಗಗಳ ವಿರುದ್ಧ ಪ್ರಾಥಮಿಕ ಹಂತದಲ್ಲಿ ಬಿ.ಸಿ.ಜಿ. ಪೋಲಿಯೋ ಹನಿ, ಡಿ.ಟಿ.ಪಿ. ಇತ್ಯಾದಿ ಲಸಿಕೆಗಳನ್ನು ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು. ಹಾಗೂ ಪ್ರತಿವರ್ಷ ಜನವರಿ ಹಾಗೂ ಫೆಬ್ರವರಿ ಮಾಹೆಗಳಲ್ಲಿ 0 ವರ್ಷದಿಂದ 5 ವರ್ಷಗೊಳಗಿನ ಎಲ್ಲಾ ಮಕ್ಕಳಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಹಮ್ಮಿಕೊಳ್ಳಲಾಗುವುದು.

2. ಕುಟುಂಬ ಕಲ್ಯಾಣ :
ಈ ಕಾರ್ಯಕ್ರಮದಡಿಯಲ್ಲಿ ಸಂತಾನೋತ್ಪತ್ತಿಯಡಿಯಲ್ಲಿರುವ ಎಲ್ಲಾ ಅರ್ಹ ದಂಪತಿಗಳನ್ನು ಈ ಕಾರ್ಯಕ್ರಮದಡಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಲಾಗುವುದು.  ಈ ಯೋಜನೆಯಡಿಯಲ್ಲಿ ಪುರುಷರಿಗೆ ವ್ಯಾಸೆಕ್ಟಮಿ, ಸ್ತ್ರೀಯರಿಗೆ ಟುಬೆಕ್ಟಮಿ, ಲ್ಯಾಪ್ರೋಸ್ಕೋಪಿಕ್ ಸಂತಾನಹರಣ ಶಸ್ತ್ರ ಚಿಕಿತ್ಸೆಯಸನ್ನು ನಡೆಸಲಾಗುವುದು. ಹಾಗೂ ಸರ್ಕಾರದ ಮಾರ್ಗದರ್ಶನದ ಸೂಚಿಯನ್ವಯ ಪ್ರೋತ್ಸಾಹಧನ ನೀಡಲಾಗುವುದು.  ಹೆರಿಗೆಯಾದ ನಂತರ ಅಂತರವನ್ನು ಕಾಯ್ದುಕೊಳ್ಳಲು ಪುರುಷರಿಗೆ ನಿರೋಧ್ ಬಳಕೆ, ಸ್ತ್ರೀಯರಿಗೆ ಐ.ಯು.ಡಿ, ನುಂಗುವ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುವುದು.

3. ಆರೋಗ್ಯ ಶಿಕ್ಷಣ ಮತ್ತು ಮಾಹಿತಿ ಕಾರ್ಯಕ್ರಮ :
ಈ ಕಾರ್ಯಕ್ರಮದಡಿಯಲ್ಲಿ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗುವ ಎಲ್ಲಾ ಆರೋಗ್ಯ ಕಾರ್ಯಕ್ರಮಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ವಸ್ತುಪ್ರದರ್ಶನದ ಮೂಲಕ ಗ್ರಾಮೀಣ ಮಟ್ಟದಲ್ಲಿ ಚಲನಚಿತ್ರ ಪ್ರದರ್ಶನ ಹಾಗೂ ಭಿತ್ತಿ ಪತ್ರಗಳ ಪ್ರದರ್ಶನದ ಮೂಲಕ ಸ್ತ್ರೀಶಕ್ತಿ ಸಂಘಗಳ ಮೂಲಕ ವಿಚಾರಗೋಷ್ಠಿ, ಚರ್ಚಾಸ್ಪರ್ಧೆ, ಆರೋಗ್ಯವಂತ ಶಿಶುಗಳ ಸ್ಪರ್ಧೆ ಇತ್ಯಾದಿಗಳನ್ನು ಹಾಗೂ ಅಂಗನವಾಡಿ ಶಿಕ್ಷಕಿಯರ ಮೂಲಕ ಪೌಷ್ಠಿಕ ಆಹಾರ ಪ್ರಾತ್ಯಾಕ್ಷಿಕೆ, ಪೋಷಕರ ಜೊತೆ ಸಂವಾದ, ಗುಂಪು ಚರ್ಚೆ ಇತ್ಯಾದಿಗಳನ್ನು ಏರ್ಪಡಿಸಲಾಗುವುದು ಹಾಗೂ ಇಲಾಖೆ ಸಿಬ್ಬಂದಿ ಮೂಲಕ ಗ್ರಾಮೀಣ ಸ್ವಚ್ಛತಾ ಕಾರ್ಯಕ್ರಮದಡಿಯಲ್ಲಿ ರಸ್ತೆ ಬದಿಯ ತಿಪ್ಪೇಗುಂಡಿಗಳ ಸ್ಥಳಾಂತರ, ಶುದ್ಧ ಕುಡಿಯುವ ನೀರಿನ ಬಳಕೆ ಹಾಗೂ ನೀರಿನ ಮುಖಾಂತರ ಹರಡುವ ಸಾಂಕ್ರಾಮಿಕ ರೋಗಗಳ ತಿಳುವಳಿಕೆ ಇತ್ಯಾದಿಗಳನ್ನು ತಿಳಿಸಲಾಗುವುದು.

4. ರೋಗ ನಿಯಂತ್ರಣ ಕಾರ್ಯಕ್ರಮಗಳು :
ಸಮಗ್ರ ರೋಗ ಕಣ್ಗಾವಲು ಘಟಕ (ಸರ್ವಲೆನ್ಸ್)
ರಾಷ್ಟ್ರೀಯ ಕೀಟಬಾಧಕ ರೋಗ ನಿಯಂತ್ರಣ ಕಾರ್ಯಕ್ರಮ (ಮಲೇರಿಯಾ ನಿಯಂತ್ರಣ ಕಾರ್ಯಕ್ರಮ)
ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮ 
ಅಂಧತ್ವ ನಿವಾರಣಾ ಕಾರ್ಯಕ್ರಮ 
ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ 
ಏಡ್ಸ್ ನಿಯಂತ್ರಣ ಕಾರ್ಯಕ್ರಮ 
ಆಶಾ ಕಾರ್ಯಕ್ರಮ 
ಆರೋಗ್ಯ ಕವಚ ಕಾರ್ಯಕ್ರಮ 
ಕರ್ನಾಟಕ ಆರೋಗ್ಯ ಸುಧಾರಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮ


ಇಲಾಖೆ ಗುರಿ ಮತ್ತು ಸಾಧನೆಗಳು:-

ಎಲ್ಲಾ ಜನರಿಗೂ ಆರೋಗ್ಯ ಸೌಲಭ್ಯ  ಒದಗಿಸುವ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪುವಂತೆ ಅನುಷ್ಠಾನಗೊಳಿಸಲಾಗುವುದು. ಅನುದಾನ: 2011-12 ನೇ ಸಾಲಿಗೆ ವಾರ್ಷಿಕವಾಗಿ ಯೋಜನೆ ಮತ್ತು ಯೋಜನೇತರ ಕಾರ್ಯಾಕ್ರಮಗಳಲ್ಲಿ ಒಟ್ಟಾರೆಯಾಗಿ ರೂ.2498.12ಲಕ್ಷ ನಿಗಧಿಯಾಗಿರುತ್ತದೆ.

ಇಲಾಖೆಯ ಪ್ರಮುಖ ಸಾಧನೆಗಳು:

ಶಿಶು ಮರಣದ ಪ್ರಮಾಣ 17 ಕ್ಕೆ ಇಳಿಕೆ 
ತಾಯಿ ಮರಣದ ಪ್ರಮಾಣ 117ಕ್ಕೆ  ಇಳಿಕೆ 
ಫಲವತ್ತತೆ ದರ (ಟಿ.ಎಸ್.ಆರ್) 1.90
ಸಾಂಸ್ಥಿಕ ಹೆರಿಗೆಗಳು 90%
ಮೂಲಭೂತ ಸೌಕರ್ಯಗಳ  ಅಭಿವೃದ್ದಿ 
ಪ್ರಾ.ಆ.ಕೇಂದ್ರಗಳ  ಉನ್ನತೀಕರಣ 
ಆರೋಗ್ಯ  ಇಲಾಖೆಯ ಮಾಹಿತಿ ಗಣಕೀಕೃತ ಸಂಗ್ರಹ 
ಬಯೋಮೆಟ್ರಿಕ್ ಮೂಲಕ ಹಾಜರಾತಿ 
ಆರೋಗ್ಯ  ಇಲಾಖೆಯ ಸಿಬ್ಬಂದಿಗಳ ತರಬೇತಿ 
‘9’ ಪ್ರಥಮ ರೆಫರಲ್ ಕೇಂದ್ರಗಳ ಪ್ರಾರಂಭ 
ಜನನಿ ಸುರಕ್ಷಾ ವಾಹಿನಿ, ಉಚಿತ  ಅಂಬ್ಯುಲೆನ್ಸ್   ಸೇವೆ

ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4(1)ಎ ಪ್ರಕಾರ

ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಾರ್ವಜನಿಕ ಪ್ರಾಧಿಕಾರವಾಗಿರುತ್ತಾರೆ.
ಸಹಾಯಕ ಆಡಳಿತಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ತುಮಕೂರು ಇವರು ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುತ್ತಾರೆ.
ಕಛೇರಿ ಅಧೀಕ್ಷಕರು ಇವರು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುತ್ತಾರೆ.
ಮುಖ್ಯ ಆಡಳಿತಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆಂಗಳೂರು ಇವರು ಇಲಾಖೆಯ ಮೇಲ್ಮನವಿ ಪ್ರಾಧಿಕಾರಿಯಾಗಿರುತ್ತಾರೆ.

ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 4(1)ಬಿ ಪ್ರಕಾರ ವಿವರಗಳು 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕರ್ತವ್ಯ ಮತ್ತು ಅಧಿಕಾರಗಳು 
ಸದರಿಯವರು ಜಿಲ್ಲೆ ಮತ್ತು ಜಿಲ್ಲೆಯ ಅಧೀನದಲ್ಲಿ ಬರುವ ಎಲ್ಲಾ ಆರೋಗ್ಯ ಸಂಸ್ಥೆಗಳ ಮುಖ್ಯಾಧಿಕಾರಿಗಳಾಗಿರುತ್ತಾರೆ.
ಆರ್ಥಿಕ ಪ್ರತ್ಯಾ ಯೋಜನಾ ಅಧಿಕಾರದಡಿಯಲ್ಲಿ ಬರುವ ಜಿಲ್ಲೆಯ ಎಲ್ಲಾ ಹುದ್ದೆಗಳ ವಿವಿಧ ಟೈಂ ಬಾಂಡ್ ಗೆ ಸಂಬಂಧಿಸಿದ ವೇತನ ಭತ್ಯೆಗಳ ಮಂಜೂರಾತಿ ಅಧಿಕಾರ.
ಜಿಲ್ಲೆಯ ಎಲ್ಲಾ ವೈದ್ಯರ ಹಾಗೂ ಸಿಬ್ಬಂದಿಯವರ ರಜಾ ಮಂಜೂರಾತಿ ಮತ್ತು ಸಾಲ ಮಂಜೂರಾತಿ ಅಧಿಕಾರ.
ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರ ಮತ್ತು ಮುಂಜಾಗರೂಕತಾ ಕ್ರಸಮ ವಹಿಸುವ ಅಧಿಕಾರ.
ಜಿಲ್ಲೆಯಲ್ಲಿನ ಆಹಾರ ಕಲಬೆರಕೆಗೆ ಸಂಬಂಧಿಸಿದ ಮೇಲ್ವಿಚಾರಣೆ ಹಾಗೂ ನಿಯಂತ್ರಣಗೊಳಿಸುವ ಅಧಿಕಾರವಿರುತ್ತದೆ.
ಜಿಲ್ಲೆಯ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕಾರ್ಯನಿರ್ವಹಣೆಯ ಮುಖ್ಯಸ್ಥರಾಗಿರುತ್ತಾರೆ.
ಪತ್ರಾಂಕಿತ ಅಧಿಕಾರಿಗಳ ಪ್ರಯಾಣ ಭತ್ಯೆ ಬಿಲ್ಲುಗಳಿಗೆ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳಿಗೆ ಮೇಲುಸಹಿ ಮಾಡುವ ಅಧಿಕಾರ.
ಜಿಲ್ಲೆಯ ಅಧೀನ ಕಛೇರಿಗಳ ನಾನ್ ಕ್ಲಿನಿಕಲ್ ಸೌಲಭ್ಯದ ಅಂಗೀಕರಿಸುವ ಅಧಿಕಾರ ಮತ್ತು ಸರಬರಾಜಿಗೆ ಸಂಬಂಧಿಸಿದ ಬಿಲ್ಲುಗಳಿಗೆ ಮೇಲುಸಹಿ ಮಾಡುವ ಅಧಿಕಾರ 
ಜಿಲ್ಲಾ ಪಂಚಾಯತಿಯಡಿ ಕೇಂದ್ರ ಪುರಸ್ಕೃತ ಅನುದಾನ ಮತ್ತು ಇತರೆ ಅನುದಾನಗಳ ಹಂಚಿಕೆ ಮತ್ತು ಅನುಷ್ಟಾನಗೊಳಿಸುವ ಅಧಿಕಾರ 
ಜಿಲ್ಲೆಯೊಳಗಿನ ಅಧೀನ ಸಂಸ್ಥೆಗಳಿಗೆ ಸಂಬಂಧಿಸಿದ ಕಟ್ಟಡ ಕಾಮಗಾರಿಗಳಿಗೆ, ಮೇಲ್ವಿಚಾರಣೆ ಮತ್ತು ಕಟ್ಟಡ ಕಾಮಗಾರಿ ಆಡಳಿತಾತ್ಮಕ ಅನುಮೋದನೆ ನೀಡುವ ಅಧಿಕಾರವನ್ನು ಹೊಂದಿರುತ್ತಾರೆ.

ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯನ್ನೊಳಗೊಂಡ ಅಧಿಕಾರಿಗಳು ಮತ್ತು ನೌಕರರ ವಿವರ 
ಆರ್.ಸಿ.ಹೆಚ್. ಅಧಿಕಾರಿಗಳು : ತಾಯಿ ಮತ್ತು ಮಕ್ಕಳ ಆರೋಗ್ಯ ನಿರ್ವಹಣೆ ಅನುಷ್ಠಾನ ಹಾಗೂ ಸಂತಾನೋತ್ಪತ್ತಿ ಹಾಗೂ ಪ್ರಸೂತಿ ಆರೈಕೆಗೆ ಸಂಬಂಧಪಟ್ಟಂತೆ ಅನುಷ್ಠಾನಗೊಳಿಸುವುದು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು : ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಕಾರ್ಯಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮದ ನಿರ್ವಹಣೆ ಮತ್ತು ಮೇಲ್ವಿಚಾರಣೆ ಬಗ್ಗೆ ಅನುಷ್ಟಾನಗೊಳಿಸುವುದು.
ಜಿಲ್ಲಾ ಮಲೇರಿಯಾ ಅಧಿಕಾರಿಗಳು : ಜಿಲ್ಲೆಯಲ್ಲಿನ ಮಲೇರಿಯಾ ಹತೋಟಿ ಕಾರ್ಯಕ್ರಮ ಹಾಗೂ ಪ್ರಕರಣಗಳು ಉಲ್ಭಣಗೊಳ್ಳದಂತೆ ಸೊಳ್ಳೆನಿಯಂತ್ರಣ ಹಾಗೂ ಐಕಾನ್ ಸಿಂಪಡಣೆ ಮಾಡುವ ಬಗ್ಗೆ ಅನುಷ್ಠಾನಗೊಳಿಸುವುದು.
ಜಿಲ್ಲಾ ಸರ್ವಲೆನ್ಸ್ ಅಧಿಕಾರಿಗಳು : ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳು ಹಾಗೂ ಮೇಲ್ವಿಚಾರಣೆ ನಿಯಂತ್ರಣದ ಬಗ್ಗೆ ಅನುಷ್ಠಾನಗೊಳಿಸುವುದು.
ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿಗಳು : ಜಿಲ್ಲೆಯಲ್ಲಿನ ಕ್ಷಯರೋಗ ನಿಯಂತ್ರಣದ ಬಗ್ಗೆ ಅನುಷ್ಟಾನಗೊಳಿಸುವುದು.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳು : ಜಿಲ್ಲೆಯಲ್ಲಿನ ಕುಷ್ಠರೋಗ ನಿಯಂತ್ರಣದ ಬಗ್ಗೆ ಅನುಷ್ಟಾನಗೊಳಿಸುವುದು.
ಸಹಾಯಕ ಆಡಳಿತಾಧಿಕಾರಿಗಳು : ಜಿಲ್ಲೆಯ ಹಾಗೂ ಈ ಕಛೇರಿಯ ಆಡಳಿತ ಹಾಗೂ ತೀರುವಳಿ ಪತ್ರ, ಎಲ್ಲಾ ವಿಭಾಗಗಳ ಮೇಲ್ವಿಚಾರಣೆ ಮತ್ತು ಸಿಬ್ಬಂದಿಗಳ ಸೇವಾ ವಿವರಗಳು ಹಾಗೂ ನೌಕರರುಗಳ ದೂರಿನ ಬಗ್ಗೆ ಕ್ರಮ ಕೈಗೊಳ್ಳುವುದು.
ಜಿಲ್ಲಾ ಶುಶ್ರೂಷಾ ಅಧಿಕಾರಿಗಳು : ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ನಡೆಯುವ ಆರೋಗ್ಯ ಪರಿಶೀಲನೆ ಬಗ್ಗೆ ಕ್ರಮ ತೆಗೆದುಕೊಳ್ಳುವುದು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು : ಮಾಹಿತಿ ಶಿಕ್ಷಣ ಹಾಗೂ ಪ್ರಚಾರದ ಅನುಷ್ಠಾನ ಮತ್ತು ಖಾಸಗಿ ಆಸ್ಪತ್ರೆ ಬಗ್ಗೆ ಮಾಹಿತಿ ಪರಿಶೀಲನೆ.
ಕಛೇರಿ ಅಧೀಕ್ಷಕರು (ಆಡಳಿತ) : ಈ ಕಛೇರಿಯ ಆಡಳಿತ ವಿಭಾಗಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ 
ಮಾಡುವುದು.
ಕಛೇರಿ ಅಧೀಕ್ಷಕರು (ಲೆಕ್ಕಪತ್ರ) : ಈ ಕಛೇರಿಯ ಲೆಕ್ಕಪತ್ರ ವಿಭಾಗಕ್ಕೆ ಸಂಬಂಧಿಸಿದ ಮೇಲ್ವಿಚಾರಣೆ ಮಾಡುವುದು.

V. ಕರ್ತವ್ಯಗಳನ್ನು ನಿರ್ವಹಿಸಲು ತಮ್ಮ ನೌಕರರು ಉಪಯೋಗಿಸುವ ನಿಯಮಗಳು, ನಿಬಂಧನೆಗಳು, ಸೂಚನೆಗಳು, ಕೈಪಿಡಿಗಳು ಮತ್ತು ದಾಖಲೆಗಳು :

ಆಡಳಿತ ನಿರ್ವಹಣೆಯಲ್ಲಿ ಈ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ನೌಕರರ ಕಾರ್ಯನಿರ್ವಹಣೆಯನ್ನು ಕೆ.ಸಿ.ಎಸ್.ಆರ್. ಕೆ.ಎಫ್.ಸಿ. ಕೆ.ಟಿ.ಸಿ. ಮತ್ತು ಇಲಾಖೆಯ ಸುತ್ತೋಲೆಗಳು ಹಾಗೂ ಜಿಲ್ಲಾ ಪಂಚಾಯತಿ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಕರ್ತವ್ಯಗಳನ್ನು ನಿರ್ವಹಿಸಲಾಗುವುದು.

ಸಂಪರ್ಕಿಸಿ:


 

District Health& Family Welfare Officer

Chitradurga

Dr.S.R.Mahalingappa, DHO Chitradurga

08194235018

Department of Health Link